ಶ್ರೀ ಶುಭಂಷ್ ಸಿನಿಕ್ರಿಯೇಷನ್ಸ್ನಲ್ಲಿ ಸಂಸ್ಥೆಯಲ್ಲಿ ಸ್ನೇಹಿತರ ಬಳಗ ನಿರ್ಮಿಸುತ್ತಿರುವ ನಂ ಮುತ್ತು ಚಿತ್ರಕ್ಕೆ ಹೋಟೆಲ್ನಲ್ಲಿ ಟೀ ಕುಡಿಯುತ್ತಿದ್ದ ನಾಯಕ ದೇವಸ್ಥಾನಕ್ಕೆ ಹೊರಟಿದ್ದ ಹುಡುಗಿಯನ್ನು ಕಂಡು ಆಕೆಯನ್ನು ಹಿಂಬಾಲಿಸುತ್ತಾನೆ. ಆದರೆ ಅಲ್ಲಿ ಆಕೆ ಇವನ ಕೈಗೆ ಸಿಗದೆ ಮಾಯವಾಗುತ್ತಾಳೆ. ನಿರಾಸೆಯಿಂದ ಅವನು ವಾಪಸ್ಸಾಗುತ್ತಾನೆ. ಈ ಮೇಲ್ಕಂಡ ಸನ್ನಿವೇಶದಲ್ಲಿ ನಾಯಕ ಶಿವು, ನಾಯಕಿ ಅರ್ಚನಾಸಿಂಗ್ ಅಭಿನಯಿಸಿದ ದೃಶ್ಯವನ್ನು ಚಿತ್ರಿಕರಿಸಿಕೊಳ್ಳಲಾಯಿತು.
ರವಿ-ಮಹಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮೋಹನ್ ಛಾಯಾಗ್ರಹಣ, ಲೋಕಿ ಸಂಗೀತ, ನವೀನ್ ಆರ್ ಸಂಕಲನ, ವಿ.ಮಹೇಶ್ ಚಿತ್ರಕಥೆ ಸಂಭಾಷಣೆ, ಶಿವರಾಜ್ ಕಥೆ, ರಾಜು ನೃತ್ಯ ನಿರ್ದೇಶನವಿದೆ. ಸುಭಾಷ್ಶೆಟ್ಟಿ, ಶಿವು (ವಿಕ್ಕಿ) ರಕ್ಷ, ಅರ್ಚನಾಸಿಂಗ್, ಗಿರಿಜಾ ಲೋಕೇಶ್, ಹರೀಶ್ ರೈ, ಅಪೂರ್ವ, ಮನದೀಪ್ರೈ, ವಿಶಾಲ್ ಕಾರ್ತಿಕ್, ಯತೀಶ, ಇಮ್ರಾನ್ ತಾರಾಬಳಗದಲ್ಲಿದ್ದಾರೆ.